ಬಂಧಿತನನ್ನು ಭಟ್ಕಳದ ಅಮರ್ ಎಂದು ಗುರುತಿಸಲಾಗಿದೆ. ದುಬೈನಿಂದ ಬಂದಿದ್ದ ಆತ, ಮುಖಗವಸಿನ ಒಳಭಾಗದಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡಿದ್ದ. ದುಬೈನಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾದರೂ ಕಲ್ಲಿಕೋಟೆಯಲ್ಲಿ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದ. ಜಪ್ತಿ ಮಾಡಲಾದ ಚಿನ್ನವು ಸುಮಾರು ₹ 2 ಲಕ್ಷ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸ್ಥಳೀಯ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.