ಕಾರವಾರ: ಕುಮಟಾದ ಪೆಟ್ರೋಲ್ ಬಂಕ್ ಒಂದರಿಂದ ಸೋಮವಾರ ಆಯಿಲ್ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬ ಬಂಕ್ನ ನಗದು ಕೌಂಟರ್ನಲ್ಲಿದ್ದ ₹1 ಲಕ್ಷ ಕಳವು ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಹುಡುಕಾಟ ನಡೆಸುತ್ತಿದ್ದಾರೆ.
ಕುಮಟಾ ಮೂರೂರು ಕ್ರಾಸ್ನಲ್ಲಿರುವ ವಿ.ಎಂ. ಮಿರ್ಜಾನಕರ್ ಪೆಟ್ರೋಲ್ ಬಂಕ್ನಲ್ಲಿ ಈ ಕಳವು ನಡೆದಿದೆ. ಬೈಕ್ನಲ್ಲಿ ಬಂದ ಆರೋಪಿ, ಆಯಿಲ್ ನೀಡುವಂತೆ ಕೇಳಿದ್ದ.
ಅದೇ ಸಂದರ್ಭದಲ್ಲಿ ಬಂಕ್ಗೆ ಮೂರು ನಾಲ್ಕು ವಾಹನಗಳು ಬಂದಿದ್ದವು. ಬಂಕ್ ಸಿಬ್ಬಂದಿ ಈ ವೇಳೆ ನಗದು ಪೆಟ್ಟಿಗೆಗೆ ಬೀಗ ಹಾಕದೇ ಇಂಧನ ನೀಡಲು ಹೋಗಿದ್ದರು.
ಈ ಸಮಯವನ್ನೇ ಉಪಯೋಗಿಸಿಕೊಂಡ ಆರೋಪಿ ನಗದನ್ನು ಜೇಬಿಗಿಳಿಸಿ ಪರಾರಿಯಾಗಿದ್ದಾನೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.