ಕಾಳಿ ನದಿಯಲ್ಲಿ ರ್ಯಾಫ್ಟಿಂಗ್, ದೋಣಿ ವಿಹಾರದ ಜೊತೆಗೆ ಹೊಸದಾಗಿ ಕಾಂಡ್ಲಾ ನಡಿಗೆಯೂ ಆರಂಭವಾಗುತ್ತಿರುವುದು ನಾಗರಿಕರ ಸಂತಸಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯು ಹೊನ್ನಾವರದಲ್ಲಿ ಶರಾವತಿ ನದಿ ಹಿನ್ನೀರಿನಲ್ಲಿ ಎರಡು ವರ್ಷಗಳ ಹಿಂದೆಯೇ ಕಾಂಡ್ಲಾ ನಡಿಗೆ ಆರಂಭಿಸಿದೆ. ಅದಕ್ಕೆ ಸಾಕಷ್ಟು ಉತ್ತಮ ಸ್ಪಂದನೆಯು ಜನರಿಂದ ಬರುತ್ತಿದೆ. ಅದೇ ಸಮಯದಲ್ಲಿ ಕಾಳಿ ನದಿಯ ದ್ವೀಪದಲ್ಲೂ ಶುರು ಮಾಡಲು ಜಿಲ್ಲೆಯ ಅಧಿಕಾರಿಗಳಿಂದ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು.