ಇದು ಸರಿಯಾದ ನಿರ್ಧಾರವೇ! ಜನರಿಂದ ಗೆಲ್ಲಲಾಗದವರು, ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಲಾಗದವರು, ಅನ್ಯ ಮಾರ್ಗಗಳ ಮೂಲಕ ವಿಧಾನಪರಿಷತ್ ಅಥವಾ ರಾಜ್ಯಸಭೆಯನ್ನು ಪ್ರವೇಶಿಸುತ್ತಿರುವುದು ಭಾರತದ ದುರಂತ. ಸಂವಿಧಾನದಲ್ಲಿ ಇವುಗಳ ಬಗ್ಗೆ ಹೇಳಲಾದ ನಿಯಮಗಳನ್ನು ಗಾಳಿಗೆ ತೂರಿ ಸದಸ್ಯರನ್ನು ಆರಿಸಲಾಗುತ್ತಿದೆ. ಹಾಗಾಗಿ ಬುದ್ಧಿಜೀವಿಗಳ, ತಜ್ಞರ ನೆಲೆವೀಡಾಗಬೇಕಿದ್ದ ಈ ಮನೆಗಳು ವಿಧಾನಸಭೆ ಮತ್ತು ಲೋಕಸಭೆಗಳಿಗಿಂತ ಭಿನ್ನವಾಗಿಯೇನೂ ಉಳಿದಿಲ್ಲ.