‘ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ತರಬೇತಿ, ಆಧುನಿಕ ಸೌಲಭ್ಯದ ಕ್ರೀಡಾಂಗಣದ ಕೊರತೆಯಿಂದ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಕ್ರೀಡಾ ತರಬೇತುದಾರರ ಅಗತ್ಯವಿದೆ’ ಎನ್ನುತ್ತಾರೆ, ಕ್ರೀಡಾಂಗಣದ ದುಃಸ್ಥಿತಿ ಸಂಬಂಧ ಕ್ರೀಡಾ ಇಲಾಖೆಗೆ ಕಾನೂನು ನೋಟಿಸ್ ನೀಡಿದ್ದ, ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ.