ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಆಗಿರುವ ತಾಂತ್ರಿಕ ತೊಂದರೆ, ಇ– ಖಾತೆ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಇದಕ್ಕೆ ಕಾರ್ಮಿಕರು, ಶ್ರಮಿಕರು ಬಲಿಪಶುಗಳಾಗುತ್ತಿದ್ದಾರೆ.ಇ ಸ್ವತ್ತು ಸಮಸ್ಯೆ ಪರಿಹಾರ ಹೋರಾಟ ಸಮಿತಿಯ ಹೋರಾಟಕ್ಕೆ ಸಂಘಟನೆ ಬೆಂಬಲ ನೀಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂಘದ ಪ್ರಮುಖರಾದ ರವಿ ಕೊಳೇಕರ, ರಮೇಶ ಹೆಗಡೆ, ರಾಜು ಕಾನಸೂರು, ರವಿ ಹಿರೇಮಠ, ಪಾವದ್, ರವೀಂದ್ರ ಜೆ.ಕೆ, ಎಂ.ಡಿ.ರವಿರಾಜ್, ಸಂತೋಷ ಸಿರ್ಸಿಕರ್ ಇದ್ದರು.