ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃಕಾರ್ಯ ನೆರವೇರಿಸಿದ ಸಚಿವ ಈಶ್ವರಪ್ಪ

Last Updated 2 ನವೆಂಬರ್ 2020, 13:36 IST
ಅಕ್ಷರ ಗಾತ್ರ

ಗೋಕರ್ಣ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ಸೋಮವಾರ ಗೋಕರ್ಣಕ್ಕೆ ಬಂದು ತಮ್ಮ ಮತ್ತು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಪಿತೃಕಾರ್ಯ ನೆರವೇರಿಸಿದರು. ಮೊದಲು ಮಹಾಗಣಪತಿ, ಮಹಾಬಲೇಶ್ವರನ ಆತ್ಮಲಿಂಗ ಹಾಗೂ ಪಾರ್ವತಿಗೆ ಪೂಜೆ ಸಲ್ಲಿಸಿದರು.

ಪಿತೃಶಾಲೆಯಲ್ಲಿ ಪಿತೃಗಳ ಸಂತೃಪ್ತಿಗಾಗಿ ನಾರಾಯಣ ಬಲಿ, ತಿಲಹೋಮ, ತ್ರಿಪಿಂಡಿ ಶ್ರಾದ್ಧ ನೆರವೇರಿಸಿದರು. ದಾನ ಧರ್ಮ, ಭೋಜನ ವ್ಯವಸ್ಥೆ ಏರ್ಪಡಿಸಿ ಧಾರ್ಮಿಕ ಕಾರ್ಯ ನೆರವೇರಿಸಿದರು. ಕ್ಷೇತ್ರ ಪುರೋಹಿತ ವೇದಮೂರ್ತಿ ಚಂದ್ರಶೇಖರ ಅಡಿ ಮೂಳೆ ನೇತೃತ್ವದಲ್ಲಿ ಉಳಿದ ಋತ್ವಿಜರ ಸಹಾಯದಿಂದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT