ಕುಮಟಾ: ಅಪಘಾತದಲ್ಲಿ ಗಾಯಗೊಂಡಿದ್ದ ಮಗುವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಟ್ಟಣದ ಮನ್ಸೂರ್ ರಫೀಕ್ ಶೇಖ್ ದಂಪತಿ ತಮ್ಮ ಸಹೋದರನ ಎರಡೂವರೆ ವರ್ಷದ ಮಗು ಜಾಫರ್ ಶೇಖ್ ಹೊನ್ನಾವರದಿಂದ ಕುಮಟಾಕ್ಕೆ ಸೋಮವಾರ ಬರುವಾಗ ಹೊಳೆಗದ್ದೆ ಟೋಲ್ ನಾಕಾ ಬಳಿ ಎದುರು ನಾಯಿ ಅಡ್ಡ ಬಂದಿದ್ದರಿಂದ ಬೈಕ್ ಉರುಳಿ ಕೆಳಗೆ ಬಿದ್ದರು. ಆಗ ಮಗುವಿಗೆ ಹೆಚ್ಚಿನ ಗಾಯವಾಯಿತು.
ಅವರ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಕ್ಷಣ ಮಗುವಿನ ಸಹಾಯಕ್ಕೆ ಧಾವಿಸಿ ಟೋಲ್ ಗೇಟ್ ಬಳಿ ಇದ್ದ ಆಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.