ಶಿರಸಿ: ತಾಲ್ಲೂಕಿನ ಕಲಕರಡಿ ಗ್ರಾಮದ ವಾಯುಪುತ್ರ ಯುವಕ ಮಂಡಳದ ಸದಸ್ಯರು ಶಾಲೆಗೆ ಬಣ್ಣ ಹಚ್ಚಿದ ಕಾರ್ಯವನ್ನು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಶ್ಲಾಘಿಸಿದ್ದಾರೆ.
ಗ್ರಾಮದ ಯುವಕ ಮಂಡಳಿಯವರು ಮಾದರಿ ಕಾರ್ಯ ಮಾಡಿದ್ದಾರೆ. ಇದು ಅನುಕರಣೀಯ ಕೆಲಸ ಎಂದು ಶ್ಲಾಘಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ಸೆ.12ರಂದು ‘ಪ್ರಜಾವಾಣಿ’ಪ್ರಕಟಿಸಿದ ವರದಿಯನ್ನು ಉಲ್ಲೇಖಿಸಿದ್ದಾರೆ.