ಹೆಬ್ಬಾರ್ ಕ್ಷೇತ್ರದಲ್ಲಿರುವ ವಿಷಯ ತಿಳಿದು, ಅವರ ಮನವೊಲಿಸಲು ಮಾಜಿ ಸಚಿವ ವಿನಯ ಕುಲಕರ್ಣಿ ಯಲ್ಲಾಪುರಕ್ಕೆ ಭೇಟಿ ನೀಡುವವರಿದ್ದರು. ಈ ವಿಷಯ ತಿಳಿದ ಹೆಬ್ಬಾರ್, ‘ಮುಂಬೈಗೆ ಮರಳುತ್ತಿದ್ದೇನೆ’ ಎಂದು ಮಾಧ್ಯಮದ ಮುಂದೆ ಪ್ರಕಟಿಸಿದರು. ದೃಶ್ಯ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿದ ಕುಲಕರ್ಣಿ, ಯಲ್ಲಾಪುರ ಭೇಟಿ ರದ್ದುಗೊಳಿಸಿದರು. ಈ ಸಂಗತಿ ಗೊತ್ತಾದ ಮೇಲೆ ಹೆಬ್ಬಾರ್ ಮತ್ತೆ ಸಭೆ ಮಾಡಿ, ಹಳಿಯಾಳ ಮಾರ್ಗವಾಗಿ ಅಜ್ಞಾತ ಸ್ಥಳಕ್ಕೆ ತೆರಳಿದರು.