ಭಕ್ತರಿಗೆ ನಿರಾಸೆ:ನಗರದ ಬಾಡದಲ್ಲಿರುವ ನಾಗಬ್ರಹ್ಮ ದೇವಸ್ಥಾನವು ಪ್ರತಿ ವರ್ಷ ನಾಗರಪಂಚಮಿಯಂದು ಭಕ್ತರಿಂದ ತುಂಬಿರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ದೇವಾಲಯದ ಬಾಗಿಲು ತೆರೆದಿರಲಿಲ್ಲ. ಇದರಿಂದ ಭಕ್ತರಿಗೆ ನಿರಾಸೆಯಾಯಿತು. ಹಲವರು ಫಲ ಪುಷ್ಪಗಳನ್ನು ಹಿಡಿದುಕೊಂಡು ದೇಗುಲದ ಹೊರಗಿನಿಂದಲೇ ಪ್ರಾರ್ಥನೆ ಸಲ್ಲಿಸಿದ್ದು ಕಂಡುಬಂತು. ಅನೇಕರು ಮನೆಗಳಲ್ಲಿ ಹಬ್ಬದ ವಿಶೇಷ ಅಡುಗೆ ಮಾಡಿದರು.