‘ನಮ್ಮ ಗುರುಗಳ ಜ್ಞಾನ ಪ್ರಕಾಶ ಇಲ್ಲಿದೆ. ಅವರು ಶತಾಯುಷಿಗಳಾಗಿ ಇರಬೇಕಿತ್ತು. ಅವರ ಜನಪರವಾದ ಯೋಚನೆ ಮತ್ತು ಯೋಜನೆಗಳಿಂದ ಸಮಾಜಕ್ಕೆ ನೆರವಾಗಿದೆ. ಅಂಥವರು ಗುರುವಾಗಿ ಸಿಕ್ಕಿದ್ದು ಪುಣ್ಯ. ಅವರೊಂದಿಗೆ ಏಳು ವರ್ಷ ಕಳೆದಿದ್ದೇನೆ. ವಯಸ್ಸಿನ ಭೇದವಿಲ್ಲದೇ ಪ್ರತಿ ವಿಚಾರದಲ್ಲೂ ಕಾಳಜಿ ತೋರಿದ್ದಾರೆ. ಅವರು ಕೈಗೊಂಡಿದ್ದ ಸಂಕಲ್ಪಗಳನ್ನು ಪೂರ್ಣಗೊಳಿಸಲು ಕಾರ್ಯ ನಿರ್ವಹಿಸಲಾಗುವುದು. ಅವರ ಮಾರ್ಗದಲ್ಲೇ ಮುಂದುವರಿಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.