‘ಲಾಕ್ಡೌನ್ ಅವಧಿಯಲ್ಲಿ ಯಾವುದೇ ನೌಕರರನ್ನು ವೇತನದಿಂದ ವಂಚಿತರನ್ನಾಗಿ ಮಾಡಬಾರದೆಂದು ಕೇಂದ್ರ ಗೃಹ ಸಚಿವಾಲಯವು ಕಾನೂನನ್ನು ಉಲ್ಲೇಖಿಸಿ, ತಿಳಿಸಿದೆ. ಆದರೆ, ಶಿರಸಿ ವಿಭಾಗೀಯ ಸಾರಿಗೆ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘಿಸಿ, ಈ ವಿಭಾಗದ ಸಾರಿಗೆ ನೌಕರರಿಗೆ ಮೇ ತಿಂಗಳ ವೇತನ ನೀಡಿಲ್ಲ. ಅಧಿಕಾರಿಗಳು, ನೌಕರರು ರಜೆ ಅರ್ಜಿಯನ್ನು ಕೊಟ್ಟರೆ ಮಾತ್ರ, ಮೇ ತಿಂಗಳ ವೇತನವನ್ನು ಬಿಡುಗಡೆ ಮಾಡುವುದಾಗಿ ನಿರ್ಬಂಧ ಹೇರುತ್ತಿದ್ದಾರೆ. ಅಲ್ಲದೇ, ನೌಕರರು ಕರ್ತವ್ಯಕ್ಕೆ ಹಾಜರಾದ ಅವಧಿಗೆ ತಮ್ಮದೇ ವೈಯಕ್ತಿಕ ರಜೆಯನ್ನು ಕೊಟ್ಟರೆ ಮಾತ್ರ ವೇತನ ನೀಡುವ ಕರಾರನ್ನು ಹಾಕುತ್ತಿದ್ದಾರೆ. ಇದು ಶಿರಸಿ ವಿಭಾಗದ ಸಾರಿಗೆ ನೌಕರರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಮತ್ತು ವಾಸ್ತವದ ಹಾಜರಾತಿಯನ್ನು ಪರಿಗಣಿಸಿ, ತಕ್ಷಣವೇ ವೇತನ ವಿತರಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.