‘ಕಾಲುವೆ ದಾರಿಯಲ್ಲಿಯೇ ಮಣ್ಣು ಕುಸಿದಿದೆ.ಮಣ್ಣು ತುಂಬಿದ 100ಕ್ಕೂ ಹೆಚ್ಚುಚೀಲಗಳನ್ನು ಹಾಕಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯ ತುಂಬಿತ್ತು. ಆಗಲೇ ಅಪಾಯದ ಮುನ್ಸೂಚನೆ ಅರಿತು, ಕೆಲವು ದಿನಗಳ ಹಿಂದೆ ಬಲಭಾಗದಲ್ಲಿ ಎರಡು ಕಾಲುವೆ ನಿರ್ಮಿಸಿ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗಿತ್ತು. ಆಗ ಎರಡು ಅಡಿಗಳಷ್ಟು ನೀರು ಕಡಿಮೆ ಮಾಡಲಾಗಿತ್ತು. ಆದರೂ ಬಲದಂಡೆಯಲ್ಲಿ ಕುಸಿದಿರುವುದು ಆತಂಕ ತಂದಿದೆ’ ಎಂದು ಗ್ರಾಮಸ್ಥ ಜಗದೀಶ ಕುರುಬರ್ ಹೇಳಿದರು.