ಜಿಲ್ಲಾ ಕಾರಾಗೃಹವನ್ನು ಬೆಳಸೆ ಗ್ರಾಮಕ್ಕೆಸ್ಥಳಾಂತರ ಮಾಡಕು ಕ್ರಮ ಕೈಗೊಳ್ಳುವುದಾಗಿ ಕಾರಾಗೃಹಗಳ ಇಲಾಖೆಯು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರ ಬರೆದು ತಿಳಿಸಿದೆ. ಈ ಸಂಬಂಧ ಶ್ರೀನಿವಾಸ ನೇತೃತ್ವದಲ್ಲಿ ಅಧಿಕಾರಿಗಳು ಈ ಪ್ರದೇಶವನ್ನುಸಮೀಕ್ಷೆ ಮಾಡಿದರು. ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಅನುದಾನ ಘೋಷಣೆಯಾಗಿದ್ದು, ನಿರ್ಮಾಣಕ್ಕೆ ಪೂರ್ವಭಾವಿ ಕೆಲಸಗಳನ್ನು ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು.