ಸ್ಥಳೀಯ ನಿವಾಸಿ ರಾಜೀವ ಹೆಗಡೆ ಮರ್ಲಮನೆ ಮಾತನಾಡಿ, ‘ಸ್ಥಾನಿಕ ಜಾತಿಯ ಮತ್ತಿ, ಹೊನಗಲು, ಹಣ್ಣಿನ ಗಿಡಗಳನ್ನು ನಾಟಿ ಮಾಡುವಂತೆ ಸ್ಥಳೀಯರು ವಿನಂತಿಸಿದ್ದರು. ಆದರೆ, ಈಗ ಕೇವಲ ಅಕೇಶಿಯಾ ಗಿಡಗಳನ್ನು ನಾಟಿ ಮಾಡುತ್ತಿರುವುದು ಆತಂಕ ಮೂಡಿಸಿದೆ. ಅಕೇಶಿಯಾ ನೆಡುತೋಪಿನಿಂದಾಗಿ, ಸುತ್ತಮುತ್ತಲಿನ ಹಳ್ಳಿಗಳಾದ ನೇರ್ಲವಳ್ಳಿ, ಸಪ್ಪುರ್ತಿ,ಮರ್ಲಮನೆ,ಸಾಯಿಮನೆ, ದೇವಿಕೈ, ಗೌಡನಮನೆ ಇನ್ನಿತರ ಹಳ್ಳಿಗಳ ಕೃಷಿಗೆ ಭವಿಷ್ಯದಲ್ಲಿ ತೊಂದರೆಯಾಗಬಹುದು’ ಎಂದರು.