ಕಂದಾಯ ಇಲಾಖೆಯು ನಿತ್ಯ ಅಗತ್ಯ ಇರುವ ಕೆಲವು ಸೇವೆಗಳನ್ನು ತಕ್ಷಣ ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಸಿಗುವಂತೆ ಮಾಡಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಪಡಿತರ ಚೀಟಿ ಸಂಖ್ಯೆಯ ಮೂಲಕ ಆ ಕುಟುಂಬದ ಎಲ್ಲ ಸದಸ್ಯರ ಜಾತಿ, ರಹವಾಸಿ ಪ್ರಮಾಣ ಪತ್ರ ಸೇರಿದಂತೆ ಅನೇಕ ಸೇವೆಗಳನ್ನು ತಕ್ಷಣ ಸಿಗುವಂತೆ ಈ ಯೋಜನೆಯಲ್ಲಿ ರೂಪಿಸಲಾಗಿತ್ತು.