‘ಕರಾವಳಿ ಭಾಗದಿಂದ ಕೆಲವು ಪ್ರವಾಸಿಗರು ಬಂದರೆ, ಇನ್ನು ಕೆಲವರು ಶಿರಸಿ ಮಾರ್ಗವಾಗಿ ಬರುತ್ತಾರೆ. ಎರಡೂ ಕಡೆಯಿಂದ ಬರುವವರು ಒಳಗಿನ ಮೂರು ಕಿ.ಮೀ ರಸ್ತೆಯಲ್ಲಿ ಸಾಗಿಯೇ ಯಾಣ ತಲುಪಬೇಕು. ಆದರೆ, ಈ ರಸ್ತೆಯ ಸ್ಥಿತಿ ನೋಡಿದರೆ, ನಮಗೆ ಸ್ಥಳೀಯರಿಗೇ ನಾಚಿಕೆಯಾಗುತ್ತದೆ. ನಿತ್ಯ ನೂರಾರು ಪ್ರವಾಸಿಗರು ಬರುವ ರಸ್ತೆ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ’ ಎನ್ನುತ್ತಾರೆ ವಿ.ಆರ್.ಹೆಗಡೆ ಮತ್ತಿಘಟ್ಟ.