ತಾಲ್ಲೂಕಿನ ದಾಸನಕೊಪ್ಪದ ಪವನಕುಮಾರ್ ನಂದಿಕೇಶ್ವರಮಠ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿ. ಎರಡು ದಿನಗಳ ಹಿಂದೆ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯದಲ್ಲಿ, ಭಾರತ ತಂಡದ ಆಟಗಾರನಾಗಿ ಭಾಗವಹಿಸಿ, ತಂಡ ಪ್ರಥಮ ಬಹುಮಾನ ಪಡೆಯುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಅಲ್ಲದೇ, ಉತ್ತಮ ಆಟಗಾರ ಬಹುಮಾನ ಪಡೆದಿದ್ದಾರೆ. ಅವರು ಶಿವಲೀಲಾ ಮತ್ತು ಬದನಗೋಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ನಂದಿಕೇಶ್ವರಮಠ ಪುತ್ರ.