ಅಂಕೋಲಾ ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಳ್ಳಿ ಭಾಗದ ರೈತರಅಳಲು ಇದು. ಗಂಗಾವಳಿ ನದಿಯ ದಡದಲ್ಲಿ ಏಳೆಂಟುವರ್ಷಗಳ ಹಿಂದೆ ಆರಂಭಿಸಲಾದಏತ ನೀರಾವರಿ ಈ ಭಾಗಕ್ಕೆ ನೀರಾವರಿ ಮೂಲವಾಗಿತ್ತು. ಆದರೆ, ಈ ಬಾರಿ ಪಂಪ್ ಹಾಳಾಗಿದೆ ಎಂಬ ಕಾರಣನೀಡಿ ಕೃಷಿಗೆ ಬೇಕಾದ ನೀರನ್ನುಹರಿಸುತ್ತಿಲ್ಲ ಎಂಬುದು ರೈತರಾದ ತಿಮ್ಮಪ್ಪ ಗೌಡ, ಗೋವಿಂದ ಗೌಡ ಹಾಗೂ ಮಂಗು ಹನುಮ ಗೌಡ ಅವರ ದೂರಾಗಿದೆ.