ಶಿರಸಿ: ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಳಂಗಿಯಲ್ಲಿ ಪಡಿತರ ಪಡೆಯಲು ಬರುವ ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಗುಂಪುಗುಂಪಾಗಿ ನಿಲ್ಲುವುದರಿಂದ ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಡಿತರ ಪಡೆಯಲು ಒಟಿಪಿ, ಬಯೊಮೆಟ್ರಿಕ್ ಬದಲಾಗಿ ಮನೆ–ಮನೆಗೆ ರೇಷನ್ ಸಾಮಗ್ರಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಜನದಟ್ಟಣಿ ತಪ್ಪಿಸಬೇಕು ಎಂದು ತಹಶೀಲ್ದಾರರನ್ನು ಒತ್ತಾಯಿಸಿದ್ದಾರೆ.