ಕುಮಟಾ ತಾಲ್ಲೂಕು ಮಾಸೂರಿನ ಗೋವಿಂದ ಗೌಡ (40) ಬಂಧಿತ ಆರೋಪಿ. ‘ಈತನು ಶಿರಸಿ, ಕುಮಟಾ ಹಾಗೂ ಇತರೆಡೆಗಳಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿ, ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರ, ಮಂಗಲಸೂತ್ರ, ಕೈಯಲ್ಲಿದ್ದ ಉಂಗುರಗಳನ್ನು ದೋಚುತ್ತಿದ್ದ. ಬಂಧಿತ ಆರೋಪಿಯಿಂದ ₹ 25ಸಾವಿರ ಬೆಲೆಬಾಳುವ ಬಜಾಜ್ ಮೋಟರ್ ಬೈಕ್, ₹ 7000 ಮೌಲ್ಯದ ಕಿವಿಯೋಲೆ, ಉಂಗುರ, ₹ 42ಸಾವಿರ ಮೌಲ್ಯದ ಸರ, ₹ 52ಸಾವಿರ ಮೌಲ್ಯದ ಎರಡು ಮಂಗಲಸೂತ್ರ ವಶಪಡಿಸಿಕೊಳ್ಳಲಾಗಿದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ತಿಳಿಸಿದರು.