ಭಾಸ್ಕರ ವಕ್ಕಲಿಗ ಮಾತನಾಡಿ, ‘ವಾಹನ ಚಾಲಕರು ಸ್ವಾರ್ಥಕ್ಕಾಗಿ, ಹಣ ಗಳಿಕೆಗಾಗಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡಬಾರದು. ಗೂಡ್ಸ್ ಗಾಡಿಗಳಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಾರೆ ಎಂಬ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು. ನಗರಠಾಣೆ ಪಿ.ಎಸ್.ಐ. ಮಾದೇಶ, ಮಾರುಕಟ್ಟೆ ಠಾಣೆಯ ಪಿ.ಎಸ್.ಐ. ಶಶಿಕುಮಾರ, ಬನವಾಸಿ ಠಾಣೆಯ ಚಂದ್ರಶೇಖರ ಹರಿಹರ, ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.