‘ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಸಂಬಂಧಿಸಿಕಾರವಾರದ ಶಾಸಕಿ ರೂಪಾಲಿ ನಾಯ್ಕ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡುವೆ ಕಲಾಪದಲ್ಲಿ ಸಂಭಾಷಣೆ ನಡೆದಿತ್ತು. ಅದನ್ನು ಫೇಸ್ಬುಕ್ನ ‘ನಮ್ಮ ಯುಕೆ’ ಗ್ರೂಪ್ನಲ್ಲಿ ಎ.ಜೆ ಅಶೋಕ ಎನ್ನುವವರು ಜನಸಾಮಾನ್ಯರು ಪ್ರಚೋದನೆಗೊಳ್ಳುವ ರೀತಿಯಲ್ಲಿ ಸೆ.15ರಂದು ಪ್ರಕಟಿಸಿದ್ದರು. ಅದಕ್ಕೆ ಗಣೇಶ ಗೌಡ ಅವರು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದರು’ ಎಂದು ಹೊಸಾಕುಳಿ ಮಡಿವಾಳಕೇರಿಯ ವಸಂತ ಈಶ್ವರ ನಾಯ್ಕ ಎಂಬುವವರು ಶುಕ್ರವಾರ ದೂರು ನೀಡಿದ್ದರು.