ಪಟ್ಟಣದ ದಿನಕರ ದೇಸಾಯಿ ರಸ್ತೆ, ಕೆ.ಸಿ ರಸ್ತೆಗಳಿಗೆ ಪ್ರತಿವರ್ಷ ತೇಪೆ ಹಾಕುವ ಕಾರ್ಯ ಕೈಗೊಳ್ಳಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಡಾಂಬರ್, ಜಲ್ಲಿ ಕಿತ್ತು ಹೋಗಿ ರಸ್ತೆಯಲ್ಲಿ ತಗ್ಗು– ದಿಣ್ಣೆಗಳು ಕಾಣಿಸಿಕೊಳ್ಳುತ್ತವೆ. ಅನೇಕ ಸಂದರ್ಭಗಳಲ್ಲಿ ಬೈಕ್ ಚಕ್ರ ಹೊಂಡದಲ್ಲಿ ಜಾರಿ ಬಿದ್ದು ಸವಾರರು ಗಂಭೀರವಾದ ಗಾಯಗೊಂಡ ಉದಾಹರಣೆಗಳಿವೆ. ಅಲ್ಲದೆ, ವಾಹನಗಳು ಹಾಳಾಗಿ, ದುರಸ್ತಿಗೂ ಹಣ ಖರ್ಚಾಗುತ್ತಿದೆ.