‘ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಖಾಸಗಿ ವೈದ್ಯರು ಹಾಗೂ ಔಷಧ ಮಾರಾಟ ಮಳಿಗೆಗಳಿಂದಕೆಮ್ಮು, ಜ್ವರ, ನೆಗಡಿಗೆ ಮಾತ್ರೆಗಳನ್ನು ತೆಗೆದುಕೊಂಡು ಹೋದವರ ಹೆಸರನ್ನು ಸಂಗ್ರಹಿಸಲು ತಿಳಿಸಲಾಗಿತ್ತು. ತಾಲ್ಲೂಕು ಆರೋಗ್ಯ ಅಧಿಕಾರಿಗಳುನೀಡಿದ ಮಾಹಿತಿಯನ್ನು ಆಧರಿಸಿ ಜನರಿಗೆ ಆರೋಗ್ಯ ಕೇಂದ್ರಕ್ಕೆ ಬರಲು ಮೊದಲೇ ಮನವರಿಕೆ ಮಾಡಲಾಗಿತ್ತು. ಇದರಿಂದ ಜನರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ’ ಎಂದು ಡಾ.ಜಗದೀಶ ನಾಯ್ಕ ತಿಳಿಸಿದರು.