‘ಬನವಾಸಿ ಭಾಗದಲ್ಲಿ ನಿರಂತರ ಮಳೆಯಿಂದ ತಂಪು ವಾತಾವರಣವಿತ್ತು. ಹೆಚ್ಚಿನ ತೇವಾಂಶದ ಕಾರಣ ಬೀಜ ಮೊಳಕೆಯೊಡೆಯಲು ತೊಂದರೆಯಾಗಿರಬಹುದು. ಬಿತ್ತನೆ ಬೀಜ ಪಡೆದಿದ್ದ ಬಹುತೇಕ ರೈತರು ಸಸಿ ಮಾಡಿ, ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಮೊಳಕೆಯೊಡೆಯದ ಬೀಜಗಳನ್ನು ವಾಪಸ್ ಪಡೆದು, ರೈತರಿಗೆ ಹೊಸದಾಗಿ ಬಿತ್ತನೆ ಬೀಜಗಳನ್ನು ನೀಡಲಾಗಿದೆ’ ಎಂದು ಬನವಾಸಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಜಿ.ಡಿ.ಪಟಗಾರ ಪ್ರತಿಕ್ರಿಯಿಸಿದರು.