ಅಗಸ್ಟ್ 8ರಂದು ಸುರಿದ ಭಾರಿ ಮಳೆಗೆ ಬೇಡ್ತಿ ಹಳ್ಳ ಉಕ್ಕಿ ಹರಿದು, ನೀರಿನ ರಭಸಕ್ಕೆ ರಸ್ತೆ ಇತ್ತೆಂಬ ಕುರುಹೂ ಸಿಗದಂತೆ ಭೂಮಿ ಕೊಚ್ಚಿಕೊಂಡು ಹೋಗಿರುವ ಕಾರಣ ಮುಂಡಗೋಡ–ಯಲ್ಲಾಪುರ ತಾಲ್ಲೂಕಿನ ಮಧ್ಯದಲ್ಲಿರುವ ಶಿಡ್ಲಗುಂಡಿ ಸೇತುವೆ ಎರಡು ತಾಲ್ಲೂಕುಗಳ ನಡುವಿನ ಸಂಪರ್ಕ ಕೊಂಡಿಯನ್ನು ಕಳಚಿದೆ. ಗಿಡಮರಗಳು, ದೇವಸ್ಥಾನ, ತನಿಖಾ ಠಾಣೆ ಎಲ್ಲವೂ ನೀರಿಗೆ ಆಹುತಿಯಾಗಿವೆ.