ಅತಿವೃಷ್ಟಿಯಿಂದ ಹಾನಿಗೊಳಗಾದಕಲ್ಲಿ, ಸಹಸ್ರಳ್ಳಿ, ಮುಂಡೆಗಳ್ಳಿ, ಅಜ್ಜರಣಿ, ಅಂಡಗಿ, ಹೊಸಕೋಪ್ಪ, ಬೆಳ್ಳನಕೇರಿ ಭಾಗದಲ್ಲಿ ವೀಕ್ಷಣೆ ಮಾಡಿದರು. ಕೃಷಿಭೂಮಿಗೆ ಹಾನಿಯುಂಟು ಮಾಡಿದ್ದ ರಂಗಾಪುರ ಕೆರೆ ವೀಕ್ಷಿಸಿದರು. ಬಳಿಕ ವರದಾ ನದಿಗೆ ಬಾಗಿನ ಅರ್ಪಿಸಿದರು. ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು ಸರ್ಕಾರದಿಂದ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಭರವಸೆ ನೀಡಿದರು.