‘ಕಾಡು ಕಣಗಲ, ಹೊನ್ನೆ, ಅಗಸೆ, ನುಗ್ಗೆ, ಹಿಪ್ಪುನೇರಳೆ, ದಡಸಲು ಹಾಗೂ ಇತರ ಹಸಿರು ಮೇವನ್ನು ಬೆಳೆಸಲು ಕಾರ್ಯಯೋಜನೆ ರೂಪಿತವಾಗಿತ್ತು. ನಾಟಿ ಮಾಡಿದ ಹಸಿರು ಮೇವು ಐದಾರು ತಿಂಗಳುಗಳಲ್ಲಿ ಕಟಾವಿಗೆ ಬರಬೇಕಾಗಿತ್ತು. ಆದರೆ, ಒಮ್ಮೆಯೂ ಇವುಗಳ ಕಟಾವು ನಡೆದಿಲ್ಲ. ನಾಟಿ ಮಾಡಿದ ಮೇಲೆ ಯಾವುದೇ ನಿರ್ವಹಣೆ ಮಾಡದ ಕಾರಣ, ಬಹುತೇಕ ಗಿಡಗಳು ನೀರಿಲ್ಲದೇ ಸತ್ತು ಹೋಗಿವೆ’ ಎನ್ನುತ್ತಾರೆ ಸ್ಥಳೀಯ ಸಂತೋಷ ನಾಯ್ಕ.