ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ‘ಕ್ಯಾಶ್ಯೂ ಕಂಪನಿ ಆರಂಭಿಸುವಾಗ ಮಾಲೀಕರು ಕಾರ್ಮಿಕರ ಮನೆ ಮನೆಗೆ ತೆರಳಿ, ವಿವಿಧ ಸೌಲಭ್ಯಗಳ ಆಮಿಷಗಳನ್ನೊಡ್ಡಿ ಕೆಲಸಕ್ಕೆ ಸೆರಿಸಿಕೊಂಡಿದ್ದರು. ಕಾರ್ಮಿಕರ ಶ್ರಮದಿಂದ ಬೆಳೆದ ಮಾಲೀಕರು ಈಗ ಕಂಪನಿ ಮುಚ್ಚಿ ಮಹಿಳಾ ಕಾರ್ಮಿಕರನ್ನು ಬೀದಿಗೆ ತಳ್ಳಿದ್ದಾರೆ. ಕಾರ್ಮಿಕರಿಗೆ ಸ್ಪಂದಿಸದಿದ್ದರೆ ಕಾನೂನಾತ್ಮಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ' ಎಂದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ, ಕಾರ್ಮಿಕ ಮುಖಂಡ ತಿಲಕ ಗೌಡ, ವೀಣಾ ನಾಯಕ ತಲಗೇರಿ ನೇತೃತ್ವ ವಹಿಸಿದ್ದರು.