‘ನವೆಂಬರ್ 20 ಕಳೆದರೂ, ಹಿಂದಿನ ತಿಂಗಳ ಸಂಬಳ ಖಾತೆಗೆ ಜಮಾ ಆಗಿಲ್ಲ. ಕೈಗಡ ಸಾಲ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಸಂಬಳಬಾರದೇ ತೊಂದರೆಯಾಗಿದೆ’ ಎಂದು 50ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ರಮೇಶ ನಾಯಕ ಅವರು, ತಾಂತ್ರಿಕ ಸಮಸ್ಯೆ ಬಗೆಹರಿಸಿ, ಆದಷ್ಟು ಶೀಘ್ರ ಸಂಬಳ ನೀಡಲಾಗುವುದು ಎಂದು ಭರವಸೆ ನೀಡಿದರು.