ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ‘ಅನೇಕ ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿಎರಡುವರ್ಷ ಕಳೆಯುತ್ತಬಂದಿದೆ. ಪರಿಕರಗಳು ಮಳೆ, ಬಿಸಿಲಿಗೆ ತುಕ್ಕು ಹಿಡಿದಿವೆ. ಕರಾವಳಿ ಭಾಗದಲ್ಲಿ ಉಪ್ಪಿನ ತೇವಾಂಶ ಇರುವುದರಿಂದ ಬೇಗ ತುಕ್ಕು ಹಿಡಿಯುತ್ತವೆ. ಆದರೆ, ಗುತ್ತಿಗೆ ಪಡೆದ ಕಂಪೆನಿಗಳಿಗೆ ಇದ್ಯಾವುದರ ಚಿಂತೆಯೂ ಇಲ್ಲ. ಇಂತಹ ಬೇಜವಾಬ್ದಾರಿಸಂಸ್ಥೆಗಳವಿರುದ್ಧ ಕ್ರಮ ಕೈಗೊಳ್ಳಬೇಕು’ಎಂದು ಒತ್ತಾಯಿಸಿದರು.