ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಕರು ಬಹಳ ಪ್ರಯತ್ನ ಪಟ್ಟಿತು. ಅದರ ತಾಯಿ ಕೂಡ ಗಾಬರಿಯಿಂದ ಓಡಾಡುತ್ತಿತ್ತು. ಸುತ್ತಮುತ್ತ ಹೋಗುತ್ತಿದ್ದವರಿಗೆತನ್ನ ಕರುವಿಗೆ ಎದುರಾದ ಸ್ಥಿತಿಯನ್ನು ತನ್ನದೇ ರೀತಿಯಲ್ಲಿ ಹೇಳಲು ಪ್ರಯತ್ನಿಸಿತು. ಸ್ಥಳೀಯರು ಸಮೀಪಕ್ಕೆ ಬಂದು ನೋಡುವಷ್ಟರಲ್ಲಿ ಕರುವಿನ ಉಸಿರು ನಿಂತಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಬ್ಬಾವಿನ ಬಾಯಿಯಿಂದ ಕರುವಿನ ಕಳೇಬರವನ್ನು ಬೇರ್ಪಡಿಸಿ, ಹಾವನ್ನು ಕಾಡಿಗೆ ಬಿಟ್ಟರು.