ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ| ಭಾನುವಾರ ಮುದ ನೀಡಿದ ಮುಂಜಾನೆ ಮಳೆ

Last Updated 31 ಮೇ 2020, 4:00 IST
ಅಕ್ಷರ ಗಾತ್ರ

ಕಾರವಾರ: ನಗರವೂ ಸೇರಿದಂತೆ ಕರಾವಳಿಯ ವಿವಿಧೆಡೆ ಭಾನುವಾರ ಬೆಳಿಗ್ಗೆಯೇ ಬಂದ ಸಾಧಾರಣ ಮಳೆ ಮುದ ನೀಡಿತು. ಬೆಳಿಗ್ಗೆ 6.15ಕ್ಕೆ ಆರಂಭವಾದ ಮಳೆ ಸುಮಾರು ಮುಕ್ಕಾಲು ಗಂಟೆ ಬಂತು.

ದಟ್ಟವಾದ ಮೋಡ, ಗುಡುಗು ಹಾಗೂ ಸಿಡಿಲಿನ ಅಬ್ಬರದೊಂದಿಗೆ ಬಂದ ಮಳೆ, ಭಾನುವಾರದ ಸಂಭ್ರಮವನ್ನು ತುಸು ಹೆಚ್ಚಿಸಿತು. ಮೂರು ದಿನಗಳಿಂದ ಗಾಳಿಯಲ್ಲಿ ಅಧಿಕ ತೇವಾಂಶ ಕಂಡುಬಂದ ಕಾರಣ ವಿಪರೀತ ಸೆಕೆಯ ಅನುಭವ ಆಗುತ್ತಿತ್ತು. ಕಾರವಾರ, ಅಂಕೋಲಾ, ಕುಮಟಾ ಸುತ್ತಮುತ್ತ ಆಗಾಗ ಕಾರ್ಮೋಡ ಕವಿದಿದ್ದರೂ ಮಳೆಯಾಗಿರಲಿಲ್ಲ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅಲೆಗಳ ಅಬ್ಬರ ಹೆಚ್ಚಿರಲಿದೆ. ಹಾಗಾಗಿ ಜೂನ್ 4ರವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕಾ ಇಲಾಖೆಯು ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT