ದೇವಳಮಕ್ಕಿ, ಸಿದ್ದರ, ನಗೆ, ಕೋವೆ, ಕೆರವಡಿ ಮುಂತಾದ ಭಾಗಗಳಲ್ಲಿ ಬಹುತೇಕ ರೈತರು ಇಂದಿಗೂ ಸಾಂಪ್ರದಾಯಿಕ ಕೃಷಿಯನ್ನೇ ಅನುಸರಿಸುತ್ತಿದ್ದಾರೆ. ಜೋಡೆತ್ತುಗಳನ್ನು ನೊಗಕ್ಕೆ ಕಟ್ಟಿ ಮಣ್ಣನ್ನು ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಮಳೆ ಇದೇ ರೀತಿ ಇನ್ನು ಸ್ವಲ್ಪ ದಿನ ಮುಂದುವರಿದರೆ ಅನುಕೂಲ ಎನ್ನುವುದು ರೈತ ಮಹಾರುದ್ರ ಅವರ ಅಭಿಪ್ರಾಯವಾಗಿದೆ.