ಗುರುವಾರ ಇಲ್ಲಿ ಕಂಡುಬಂದು ಕನ್ನಡ ರಾಜ್ಯೋತ್ಸವದ ಸಂಭ್ರಮವಿದು. ರೆಡ್ ಆ್ಯಂಟ್ ಸಂಘಟನೆ ₹ 40ಸಾವಿರ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಧ್ವಜವನ್ನು ಸುಮಾರು 1500ಕ್ಕೂ ಮಕ್ಕಳು ಹಿಡಿದರು. 14 ಶಾಲೆಗಳ ಸೇವಾದಳ ತಂಡ, 13 ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, 11 ಸಮವಸ್ತ್ರ ತಂಡಗಳು ಶಿಸ್ತಿನ ಪಥಸಂಚಲನ ನಡೆಸಿದವು. ಮಾರಿಕಾಂಬಾ ಪ್ರೌಢಶಾಲಾ ಮೈದಾನದಿಂದ ಹೊರಟ ಮೆರವಣಿಗೆ, ಅಶ್ವಿನಿ ಸರ್ಕಲ್, ಸಿ.ಪಿ.ಬಜಾರ, ನಟರಾಜ ರಸ್ತೆ ಮಾರ್ಗವಾಗಿ ಪುನಃ ಇದೇ ಶಾಲೆಯ ಆವರಣಕ್ಕೆ ಬಂದು ಸಮಾಪ್ತಿಗೊಂಡಿತು.