ಇಲ್ಲಿನ ಗಣೇಶನಗರದ ವೇದ ಆರೋಗ್ಯ ಕೇಂದ್ರವಾದ ನಿಸರ್ಗ ಮನೆಯಲ್ಲಿ ನಡೆದ ರಂಭಾಪುರಿ ಶ್ರೀಗಳ ಶುಭಾಗಮನ ಹಾಗೂ ಸಂದೇಶ ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಶ್ರೀಗಳು ಮಾತನಾಡಿದರು. ಧರ್ಮ, ಪರಂಪರೆ, ಆದರ್ಶ ಕಲಿಸುವ ಮಠಾಧಿಪತಿಗಳ ಆರೋಗ್ಯ ಸಮಸ್ಯೆ ಹೆಚ್ಚಿದ್ದು, ನಿಸರ್ಗಮನೆ ಇವೆಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ಶರೀರ ಸದೃಢವಾಗಿದ್ದರೆ ಧರ್ಮ ಸಾಧನೆ ಮಾತ್ರವಲ್ಲ ಸಾಮಾಜಿಕ ಕಾರ್ಯವನ್ನೂ ಮಾಡಬಹುದು. ಆದರೆ ಒತ್ತಡದ ಜೀವನ ಸಮಾಜದ ಪ್ರತಿಯೊಂದು ರಂಗವನ್ನು ವ್ಯಾಪಿಸಿದೆ. ಇದರೊಂದಿಗೆ ಮಠಾಧಿಪತಿಗಳ ಮಾನಸಿಕ ವ್ಯಾಧಿಯೂ ಹೆಚ್ಚಿದೆ. ನಿಸರ್ಗ ಚಿಕಿತ್ಸೆ ಮೂಲಕ ಇದರ ನಿವಾರಣೆ ಮಾಡಿಕೊಳ್ಳಬಹುದು ಎಂದರು.