ಕಾಡಿನ ಜಿಲ್ಲೆಯ ಅರಣ್ಯ ರಕ್ಷಣೆಯಲ್ಲಿ ಸಕ್ರಿಯವಾಗಿದ್ದ ಗ್ರಾಮ ಅರಣ್ಯ ಸಮಿತಿಗಳು (ವಿಎಫ್ಸಿ) ಇತ್ತೀಚಿನ ವರ್ಷಗಳಲ್ಲಿ ಕ್ರಿಯಾಶೀಲತೆ ಕಳೆದುಕೊಂಡಿವೆ. ಬೆರಳೆಣಿಕೆಯ ಸಮಿತಿಗಳು ಮಾತ್ರ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದರೂ, ಇಲಾಖೆಯಿಂದ ಸಿಗದ ಸಂಪೂರ್ಣ ಸಹಕಾರದಿಂದ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದೆ, ಅಸಹಾಯಕ ಸ್ಥಿತಿಯಲ್ಲಿವೆ. ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ‘ಪಾಲಿಸಿದರೆ ಪಾಲು’ ಯೋಜನೆಯಲ್ಲಿ ಗರಿಷ್ಠ ₹16 ಕೋಟಿಯಷ್ಟು ಮೊತ್ತದ ಪಾಲು ಪಡೆದಿರುವ ಶಿರಸಿ ತಾಲ್ಲೂಕಿನ ಅರಣ್ಯ ಸಮಿತಿಗಳು ಸಹ ಈಗ ತಣ್ಣಗಾಗಿವೆ. ವಿಎಫ್ಸಿಗಳಿಗೆ ವಿತರಣೆಯಾಗುತ್ತಿರುವ ಲಾಭಾಂಶದ ಹಣ ಕೂಡ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ.