ಹಬ್ಬುವಾಡ ರಸ್ತೆಯಿಂದ ಒಳಕ್ಕೆ ಸಾಗಿದಾಗ ಚರಂಡಿ ಕಾಮಗಾರಿಗೆಂದು ಸುಮಾರು 20 ಅಡಿ ಜಾಗವನ್ನು ರಸ್ತೆ ಮಾಡದೇ ಖಾಲಿ ಬಿಡಲಾಗಿದೆ. ಅಲ್ಲಿ ಒಂದು ರಸ್ತೆಯಿಂದ ಇಳಿಯುವಲ್ಲಿ ಮತ್ತು ಮುಂದುವರಿದ ರಸ್ತೆಗೆ ಹತ್ತುವಲ್ಲಿ ಸುಮಾರು ಅರ್ಧ ಅಡಿಯಷ್ಟು ಅಂತರವಿದೆ. ಅಲ್ಲಿಗೆ ಹಾಕಲಾಗಿದ್ದ ಮಣ್ಣು ಪುಡಿಯಾಗಿ ಹಾರಿ ಹೋಗಿದ್ದು, ತಕ್ಷಣಕ್ಕೆ ವಾಹನ ಸವಾರರಿಗೆ ತಿಳಿಯುವುದಿಲ್ಲ.ದ್ವಿಚಕ್ರ ವಾಹನ ಸವಾರರು ಇಲ್ಲಿ ಬಹಳ ನಾಜೂಕಾಗಿ ಸಾಗಬೇಕಿದೆ. ಮಹಿಳೆಯರು, ಗರ್ಭಿಣಿಯರು, ಹಿರಿಯರು, ಎಲುಬು ಸಂಬಂಧಿ ನೋವು ಹೊಂದಿದವರು ವಾಹನದಲ್ಲಿದ್ದರೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.