ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಕ್ರೀಟ್ ರಸ್ತೆಯ ತುದಿಗೆ ಸಿಮೆಂಟ್ ತುಂಬಿ’

Last Updated 8 ಮೇ 2019, 12:05 IST
ಅಕ್ಷರ ಗಾತ್ರ

ಕಾರವಾರ:ನಗರದ ಕೆಎಚ್‌ಬಿ ಹೊಸ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಗಳ ಆರಂಭ ಮತ್ತುಕೊನೆಯಲ್ಲಿ ಹಾಕಲಾಗಿದ್ದ ಮಣ್ಣು, ವಾಹನಗಳ ನಿರಂತರ ಸಂಚಾರದಿಂದ ದೂಳಾಗಿ ಹೋಗಿದೆ. ಇದರಿಂದ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದೆ.

ಹಬ್ಬುವಾಡ ರಸ್ತೆಯಿಂದ ಒಳಕ್ಕೆ ಸಾಗಿದಾಗ ಚರಂಡಿ ಕಾಮಗಾರಿಗೆಂದು ಸುಮಾರು 20 ಅಡಿ ಜಾಗವನ್ನು ರಸ್ತೆ ಮಾಡದೇ ಖಾಲಿ ಬಿಡಲಾಗಿದೆ. ಅಲ್ಲಿ ಒಂದು ರಸ್ತೆಯಿಂದ ಇಳಿಯುವಲ್ಲಿ ಮತ್ತು ಮುಂದುವರಿದ ರಸ್ತೆಗೆ ಹತ್ತುವಲ್ಲಿ ಸುಮಾರು ಅರ್ಧ ಅಡಿಯಷ್ಟು ಅಂತರವಿದೆ. ಅಲ್ಲಿಗೆ ಹಾಕಲಾಗಿದ್ದ ಮಣ್ಣು ಪುಡಿಯಾಗಿ ಹಾರಿ ಹೋಗಿದ್ದು, ತಕ್ಷಣಕ್ಕೆ ವಾಹನ ಸವಾರರಿಗೆ ತಿಳಿಯುವುದಿಲ್ಲ.ದ್ವಿಚಕ್ರ ವಾಹನ ಸವಾರರು ಇಲ್ಲಿ ಬಹಳ ನಾಜೂಕಾಗಿ ಸಾಗಬೇಕಿದೆ. ಮಹಿಳೆಯರು, ಗರ್ಭಿಣಿಯರು, ಹಿರಿಯರು, ಎಲುಬು ಸಂಬಂಧಿ ನೋವು ಹೊಂದಿದವರು ವಾಹನದಲ್ಲಿದ್ದರೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.

ಇದೇ ರಸ್ತೆಯಲ್ಲಿಗೋಲ್ಡನ್ ಬೇಕರಿಯಿಂದ ಕೆಳಭಾಗದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆಂದು ಜಲ್ಲಿಕಲ್ಲು ಹಾಗೂ ಸಿಮೆಂಟ್ ಪುಡಿ ಹಾಕಲಾಗಿತ್ತು. ಅದನ್ನು ಪೂರ್ಣಗೊಳಿಸಲಿಲ್ಲ. ಆದರೆ, ರಸ್ತೆಗೆ ಅಡ್ಡಲಾಗಿ ಹೊಂಡ ಮಾಡಲಾಗಿದ್ದು, ವಾಹನ ಸವಾರರನ್ನು ಪೇಚಿಗೆ ಸಿಲುಕಿಸುತ್ತಿದೆ. ಎದುರಿನಿಂದ ವಾಹನಗಳು ಬಂದರೆ ಇಲ್ಲಿ ನಿಲ್ಲಿಸಿಯೇ ಮುಂದೆ ಸಾಗುವಂತಾಗಿದೆ.

ಎರಡೂ ಕಡೆಗಳಲ್ಲಿ ನಗರಸಭೆಯು ರಸ್ತೆ ಹೊಂಡಗಳಿಗೆ ಸಿಮೆಂಟ್ ತುಂಬಿಸಿ ಶಾಶ್ವತವಾಗಿ ದುರಸ್ತಿ ಮಾಡಬೇಕು. ಮಳೆಗಾಲ ಆರಂಭವಾದರೆ ಇಲ್ಲಿ ನೀರು ನಿಂತು ಅಪಘಾತಗಳಾದರೂ ಅಚ್ಚರಿಯಿಲ್ಲ.

– ನಾಗರಾಜ್ ಕಾರವಾರ, ಕೆಎಚ್‌ಬಿ ಕಾಲೊನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT