ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ರಾಮನಾಯ್ಕ ಮಾತನಾಡಿ, ‘ಸಂಘಟನೆಗಳು ಅಸಂಘಟಿತ ಹಾಗೂ ಧ್ವನಿಯಿಲ್ಲದ ಕಾರ್ಮಿಕರಿಗೆ ಆಸರೆಯಾಗಬೇಕು. ಮನುಷ್ಯನಿಗೆ ಅನುಭವಕ್ಕಿಂತ ದೊಡ್ಡ ವಿದ್ಯೆಯಿಲ್ಲ. ಇದಕ್ಕೆ ಕಾರ್ಯಕ್ರಮ ಉದ್ಘಾಟಿಸಿದ ಉಮಾಬಾಯಿ ಅವರೇ ಸಾಕ್ಷಿ. 18 ವರ್ಷಗಳಿಂದ ಸಿಮೆಂಟ್, ಕಾಂಕ್ರೀಟ್ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಈ ರೀತಿಯ ಅನೇಕ ಕಾರ್ಮಿಕರು ವಿವಿಧ ರಂಗಗಳಲ್ಲಿದ್ದಾರೆ. ಅವರೆಲ್ಲರ ಸಂಘಟನೆಯಾಗಲಿ’ ಎಂದು ಆಶಿಸಿದರು.