ದಿನ ಬಳಕೆಯ ಪ್ಲಾಸ್ಟಿಕ್ ಸರಕುಗಳು ಮತ್ತು ಚೀಲಗಳನ್ನು ತುಂಬಿಕೊಂಡು ಮುಂಬೈನಿಂದ ಬರುತ್ತಿದ್ದ ಲಾರಿ ಕೇರಳದ ಕಲ್ಲಿಕೋಟೆಗೆ ಸಂಚರಿಸುತ್ತಿತ್ತು. ಇಲ್ಲಿನ ಚಂದುಮಠ ಕ್ರಾಸ್ ಬಳಿ ಇಳಿಜಾರು ರಸ್ತೆಯಲ್ಲಿ ವೇಗವಾಗಿ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ, ನಿಯಂತ್ರಣ ಕಳೆದುಕೊಂಡು ಬಲಬದಿಯಲ್ಲಿ ವಾಹನ ಚಲಾಯಿಸಿದ್ದಾರೆ. ಮುಂದಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಇನ್ನಷ್ಟು ಬಲಬದಿಗೆ ಸಾಗಿದಾಗ ಲಾರಿಯು ಸೇತುವೆ ಅಡಿಯ ಹಳ್ಳಕ್ಕೆ ಬಿದ್ದಿದೆ. ಲಾರಿಯಲ್ಲಿದ್ದ ಸರಕುಗಳು ಚೆಲ್ಲಾಪಿಲ್ಲಿಯಾಗಿ ಹಳ್ಳಕ್ಕೆ ಬಿದ್ದಿವೆ.