ಸಹಕಾರ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ತರಲು ಪ್ರಯತ್ನಿಸಲಾಗುವುದು ಎಂದರು. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ್ ಮಾತನಾಡಿ, ‘ಏಪ್ರಿಲ್ನಲ್ಲಿ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವ ಆಚರಿಸಲು ಯೋಚಿಸಲಾಗಿದೆ. ಸಚಿವರು ಸರ್ಕಾರದಿಂದ ₹ 5 ಕೋಟಿ ನೆರವು ನೀಡಿದರೆ, ಶತಮಾನೋತ್ಸವ ಭವನ ನಿರ್ಮಿಸಲಾಗುವುದು’ ಎಂದರು. ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ನಿರ್ದೇಶಕರಾದ ಮಂಕಾಳ ವೈದ್ಯ, ಜಿ.ಆರ್.ಹೆಗಡೆ ಸೋಂದಾ, ಮೋಹನದಾಸ ನಾಯಕ, ಶಿವಾನಂದ ಕಡತೋಕ, ಜಿ.ಟಿ.ಹೆಗಡೆ ತಟ್ಟೀಸರ, ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್.ಬಾಂದುರ್ಗಿ ಉಪಸ್ಥಿತರಿದ್ದರು.