‘ಎಲ್ಲರೂ ಆರೋಗ್ಯವಂತರು, ಆಯುಷ್ಯವಂತರಾಗಲೆಂಬ ಸದಾಶಯದಿಂದ ದೊಡ್ಡ ಪ್ರಮಾಣದಲ್ಲಿ ಮಹಾಮೃತ್ಯುಂಜಯ ಹವನ, ಧನ್ವಂತರಿ ಹವನ, ಸಹಸ್ರ ವಿಷ್ಣು ಸಹಸ್ರನಾಮ ಪಾರಾಯಣ, ಮೃತ್ಯುಭಯ ನಿವಾರಣೆಯ ಉದ್ದೇಶದಿಂದ ವಿಧಿಸಿದ ಜನಮಾರಶಾಂತಿ, ಮಹಾರುದ್ರ ಪಾರಾಯಣ ಮತ್ತು ಅಭಿಷೇಕ, 32ಸಾವಿರ ಲಕ್ಷ್ಮೀನೃಸಿಂಹ ಜಪ ಮತ್ತು ಹವನ, ಲಕ್ಷ್ಮೀನೃಸಿಂಹ ದೇವರಿಗೆ 10ಸಾವಿರ ತುಳಸಿ ಅರ್ಚನೆ ಮೊದಲಾದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ದೇವರಲ್ಲಿ ಪೂಜೆ, ಪ್ರಾರ್ಥನೆ, ಹವನ ಮಾಡುವುದರಿಂದ ಖಂಡಿತ ಒಳ್ಳೆಯದಾಗುತ್ತದೆ’ ಎಂದು ಶ್ರೀಗಳು ಹೇಳಿದ್ದಾರೆ. ಮಠದ ವ್ಯವಸ್ಥಾಪಕರಾದ ಎಸ್.ಎನ.ಗಾಂವಕರ, ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಇದ್ದರು.