ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದೀಪಕ್ ಕಳಸ, ‘ದೇವರಿಗೆ ಪೂಜೆ ಸಲ್ಲಿಸಿದ ಭಕ್ತರು ಉಪ್ಪನ್ನು ಅವರೇ ತೆಗೆದುಕೊಂಡು ಹೋಗಿ ಕಾಳಿ ನದಿ ಸಂಗಮದಲ್ಲಿ ಹಾಕಬೇಕು. ಇದರಿಂದ ಧಾರ್ಮಿಕ ಭಾವನೆಗೂ ಅಡ್ಡಿ ಆಗುವುದಿಲ್ಲ. ಸಮಿತಿಗೆ ರಾಶಿ ರಾಶಿ ಉಪ್ಪನ್ನು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ. ಜತೆಗೆ ಉಪ್ಪು ಹಾಕುವ ಸ್ಥಳದಲ್ಲಿ ವಿದ್ಯುತ್ ಪರಿವರ್ತಕವಿದೆ.ಇದಕ್ಕೆ ತೊಂದರೆ ಆಗುತ್ತದೆ. ಉಪ್ಪಿನ ಅಂಶ ಕಬ್ಬಿಣದ ವಸ್ತುಗಳಿಗೆ ತಾಗಿ ಬೇಗ ತುಕ್ಕು ಹಿಡಿಯುತ್ತಿದೆ’ ಎಂದು ಸಮಸ್ಯೆಯನ್ನು ವಿವರಿಸಿದರು.