ಜೊಯಿಡಾ:ತಾಲ್ಲೂಕಿನ ನಾಗೋಡಾ ಸಮೀಪದ ಅರಣ್ಯದಲ್ಲಿ ಕತ್ತರಿಸಿ ಇಟ್ಟಿದ್ದಶ್ರೀಗಂಧದ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಸುಮಾರು₹ 2 ಲಕ್ಷ ಮೌಲ್ಯದ ಗಂಧದ ಕಟ್ಟಿಗೆಯನ್ನು ಜಪ್ತಿ ಮಾಡಲಾಗಿದ್ದು,ಆರೋಪಿಗಳಿಗೆಹುಡುಕಾಟ ನಡೆಸಲಾಗಿದೆ. ನಾಗೋಡಾ ಅರಣ್ಯದಲ್ಲಿ ಎರಡು ಗಂಧದ ಮರಗಳನ್ನು ಬುಡದಿಂದ ಕತ್ತರಿಸಲಾಗಿತ್ತು. ಅಲ್ಲೇ ಒಣಗಲು ಬಿಟ್ಟು ಆರೋಪಿಗಳು ಸ್ಥಳದಿಂದ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು
ಜೊಯಿಡಾ ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಪ್ರಕರಣ ದಾಖಲಿಸಿಕೊಂಡಿದ್ದಾರೆ.