ನದಿ ತಟದಲ್ಲಿರುವ ಚಿಕ್ಕ ಚಿಕ್ಕ ಕಲ್ಲುಗಳನ್ನು ಜೋಡಿಸಿ, ಅದಕ್ಕೂ ಪೂಜೆ ಸಲ್ಲಿಸಿದರು. ಸಂಕ್ರಮಣ ಕಾಲದಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ಪ್ರವಾಸಗರು ಬಂದಿದ್ದರು. ‘ಪ್ರತಿವರ್ಷ ಸಂಕ್ರಾಂತಿಗೆ ನಾವು ಸಹಸ್ರಲಿಂಗಕ್ಕೆ ಬರುತ್ತೇವೆ. ಸಂಕ್ರಾಂತಿಯಂದು ಕರಿ ಸ್ನಾನ ಮಾಡುವುದು ವಿಶೇಷ. ಕುಟುಂಬಕ್ಕೆ ಕಷ್ಟ ಬಂದಾಗ, ಮಕ್ಕಳಿಗೆ ಅನಾರೋಗ್ಯವಾದಾಗ ಹೊತ್ತುಕೊಂಡಿರುವ ಹರಕೆ ತೀರಿಸಲು, ಇಲ್ಲಿಗೆ ಬರುತ್ತೇವೆ’ ಎಂದು ಬೆಳಗಾವಿಯಿಂದ ಬಂದಿದ್ದ ಸಹನಾ ಹೇಳಿದರು.