‘ನಮ್ಮ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಇದ್ದು, 22 ವಿದ್ಯಾರ್ಥಿಗಳಿದ್ದಾರೆ. ಕಟ್ಟಡದಲ್ಲಿರುವ ಎರಡೂಕೊಠಡಿಗಳು ಶಿಥಿಲವಾಗಿವೆ. ಒಂದು ಕೊಠಡಿಯ ನಾಲ್ಕೂ ಗೋಡೆಗಳುಬಿರುಕು ಬಿಟ್ಟಿದ್ದು, ಮತ್ತೊಂದರ ಚಾವಣಿಯ ಜಂತಿಗಳು ಹಾಳಾಗಿವೆ. ಇದ್ದುದರಲ್ಲಿಯೇ ಸ್ವಲ್ಪ ಉತ್ತಮವಾಗಿರುವ ಕೊಠಡಿಯಲ್ಲಿ ಶಾಲೆ ನಡೆಸುತ್ತಿದ್ದೇವೆ. ಮಳೆಗಾಲದಲ್ಲಿ ರಂಗಮಂದಿರದಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗಿದೆ’ ಎಂದುಸಮಿತಿಯಅಧ್ಯಕ್ಷ ರಾಘವೇಂದ್ರ ನಾಯ್ಕ ಸಮಸ್ಯೆ ವಿವರಿಸಿದರು.