ಈ ಪ್ರದೇಶದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಹಾನಿಯಾಗಿಲ್ಲ. ಆದರೆ, ಗುಡ್ಡದ ತಪ್ಪಲಿನಲ್ಲಿರುವ ಗದ್ದೆಗಳಿಗೆ ಈ ಭಾಗದಿಂದಲೇ ನೀರು ಹರಿಯುತ್ತದೆ. ಅದರೊಂದಿಗೆ ಕೆಸರು ಮಿಶ್ರಣವಾಗಿ ಫಲವತ್ತಾದ ಗದ್ದೆಗಳಿಗೆ ಹರಿದು ಬಂದು ಬೇಸಾಯಕ್ಕೆ ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ ಎನ್ನುತ್ತಾರೆ ಸ್ಥಳೀಯ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್.