ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದ ಶ್ರೀಗಳು, ವ್ರತ ಸಮಾಪ್ತಿಯಾದ ದಿನವೇ, ಈ ಭಾಗಕ್ಕೆ ಭೇಟಿಕೊಟ್ಟು, ಗ್ರಾಮಸ್ಥರ ಜೊತೆಗೆ ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿ, ಪರಿಸ್ಥಿತಿ ಅವಲೋಕಿಸಿದರು. ‘ಸಂಪೂರ್ಣ ಮನೆ ಕಳೆದುಕೊಂಡಿರುವ ಕುಣಬಿಗರ ಕುಟುಂಬಕ್ಕೆ ಈ ಹಿಂದೆ ನೀಡಿದ ಭರವಸೆಯಂತೆ ದೀಪಾವಳಿಯ ನಂತರ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಕಷ್ಟ ಬಂದಿದೆಯೆಂದು ಆತಂಕಕ್ಕೆ ಒಳಗಾಗಬಾರದು. ಕಷ್ಟದ ಹಿಂದೆ ಸುಖ ಇರುತ್ತದೆ. ಇವೆರಡನ್ನೂ ಸಮನಾಗಿ ಸ್ವೀಕರಿಸಬೇಕು’ ಎಂದು ಶ್ರೀಗಳು ಹೇಳಿದರು.